ವ್ಯಥೆಗೊಂಡ ಮನಸೆ
ವ್ಯಥಾ ಏನು ಕನಸು?
ಇಲ್ಲಿಲ್ಲ ಶಾಂತಿ
ಎಲ್ಲೆಲ್ಲೂ ಕ್ರಾಂತಿ!
ಮನದೊಳಗಿರುವ ವೇದನೆಯನ್ನು
ತಿಳಿಯದು ಜಗವು ನಿಜವಿಹುದನು
ದುಃಖದ ಜ್ವಾಲೆ
ಬೇನೆಯ ಶೂಲೆ
ಚಿತ್ತವ ಸುಡುತಿದೆ
ಹೊತ್ತರಿಯದೆಯೆ. . . .!
ದೂರದ ಬೆಟ್ಟ ನೋಟಕೆ ಇಷ್ಟ
ಯಾರರಿವರು ನಿಜ ಮನಸಿನ ಕಷ್ಟ
ಶ್ರೇಷ್ಠನು ಎಂಬ
ಮನಸಿನ ಜಂಬ
ಸುಡುತಿದೆ ಅವನ
ಬಹುದಿನದಿಂದ….!
ಸ್ವಾರ್ಥದ ನೆರಳಲಿ ಜೀವಿಪ ಜಗವು
ಅರ್ಥವ ತಿಳಿಯದು ಬಾಳಿನ ನಿಜವು
ನೀರಿನ ಗುಳ್ಳೆ
ಬಾಳಿದು ಪೊಳ್ಳೆ;
ಕಾಣಲು ಸಿಗದು
ಚಣದೊಳು ಮರುಳೆ….!
ಸತ್ಯದ ಸೋಗು ಜೀವಿತವಾಗಿ
ಮಿಥ್ಯದ ಸೆಳತವು ಇರುವುದೆ ತಾಗಿ
ಜೀವಿಸಲೆಂದು ಆಟವಿದೆಲ್ಲ
ಜೀವಿಪ ಜಗವು ಹೇಳುವ ಸೊಲ್ಲ……
ಸಿಗದಯ್ಯೋ! ಶಾಂತಿ,
ಅಗಲದು ಭ್ರಾಂತಿ!
ಧರೆಯೊಳು ಇನಿತೂ
ದೊರೆಯದು ಶಾಂತೀ……
*****
Related Post
ಸಣ್ಣ ಕತೆ
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಆ ರಾತ್ರಿ
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…